<p><strong>ಶಿರಸಿ:</strong> ‘ಪ್ರತಿಯೊಬ್ಬರೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ನಾಮ ಸಂಕೀರ್ತನೆ, ಪೂಜೆ, ಧ್ಯಾನ ಮೊದಲಾದ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.<br /> <br /> ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಮೈಸೂರು, ಶಿವಮೊಗ್ಗ, ಬೆಂಗಳೂರು ಹವ್ಯಕ ಮಹಾಸಭಾದ ಶಿಷ್ಯರು ಸಲ್ಲಿಸಿದ ಭಿಕ್ಷೆ, ಪಾದಪೂಜೆ ಸ್ವೀಕರಿಸಿ ಅವರು ಮಾತನಾಡಿದರು. ‘ತಡವಾಗಿ ಮಲಗಿ ತಡವಾಗಿ ಏಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೇಗ ಮಲಗಿ ಬೇಗ ಏಳುವಂತಾಗಬೇಕು. ಬೆಳಿಗ್ಗೆ 4ರಿಂದ 5 ಗಂಟೆಯೊಳಗೆ ಸಂಧಿಸುವ ಬ್ರಾಹ್ಮೀ ವೇಳೆ ಅತ್ಯಂತ ಉತ್ತಮ ವೇಳೆಯಾಗಿದೆ. ಆ ಹೊತ್ತಿಗೆ ಎದ್ದು ಶೌಚ-, ಸ್ನಾನಾದಿಗಳನ್ನು ಮುಗಿಸಿ ದೇವರ ಉಪಾಸನೆ ಮಾಡಬೇಕು’ ಎಂದರು.<br /> <br /> ‘ಪ್ರಾಣಾಯಾಮ-, ಯೋಗಗಳನ್ನು ಅನುಷ್ಠಾನ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಮನಸ್ಸು ಏಕ್ರಾಗತೆ ಸಾಧಿಸುತ್ತದೆ. ಶರೀರದ ನಾಡಿಗಳು ಸ್ಪಂದಿಸುತ್ತವೆ, ಉತ್ಸಾಹ ಸಹಜವಾಗಿಯೇ ಇರುತ್ತದೆ. ಇದರಿಂದ ದೇಹದಲ್ಲಿ ಆರೋಗ್ಯ ಹೆಚ್ಚುತ್ತದೆ’ ಎಂದರು.<br /> <br /> ಬೆಂಗಳೂರು ಹವ್ಯಕ ಮಹಾಸಭಾದವರು ನಿರ್ವಹಿಸುತ್ತಿರುವ ಸಾಮಾಜಿಕ ಚಟುವಟಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇದಕ್ಕೂ ಹೆಚ್ಚಿನ ಕಾರ್ಯಗಳು ನಡೆಯಲೆಂದು ಆಶಿಸಿದರು. ಬೆಳಗಿನಿಂದ ಆಗಮಿಸಿದ ಶಿಷ್ಯ-ಭಕ್ತರು ಲೋಕಕಲ್ಯಾಣಾರ್ಥವಾಗಿ ಗಾಯತ್ರಿ ಜಪ ಹಾಗು ಕಂಕುಮಾರ್ಚನೆ ನೆರವೇರಿದರು. ಆರ್. ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾತೆಯರು ಶಾಂಕರ ಸ್ತೋತ್ರ ಪಠನ ಹಾಗೂ ಭಗವದ್ಗೀತಾ ಪಠನ ಗೈದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ‘ಪ್ರತಿಯೊಬ್ಬರೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ನಾಮ ಸಂಕೀರ್ತನೆ, ಪೂಜೆ, ಧ್ಯಾನ ಮೊದಲಾದ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.<br /> <br /> ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಮೈಸೂರು, ಶಿವಮೊಗ್ಗ, ಬೆಂಗಳೂರು ಹವ್ಯಕ ಮಹಾಸಭಾದ ಶಿಷ್ಯರು ಸಲ್ಲಿಸಿದ ಭಿಕ್ಷೆ, ಪಾದಪೂಜೆ ಸ್ವೀಕರಿಸಿ ಅವರು ಮಾತನಾಡಿದರು. ‘ತಡವಾಗಿ ಮಲಗಿ ತಡವಾಗಿ ಏಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೇಗ ಮಲಗಿ ಬೇಗ ಏಳುವಂತಾಗಬೇಕು. ಬೆಳಿಗ್ಗೆ 4ರಿಂದ 5 ಗಂಟೆಯೊಳಗೆ ಸಂಧಿಸುವ ಬ್ರಾಹ್ಮೀ ವೇಳೆ ಅತ್ಯಂತ ಉತ್ತಮ ವೇಳೆಯಾಗಿದೆ. ಆ ಹೊತ್ತಿಗೆ ಎದ್ದು ಶೌಚ-, ಸ್ನಾನಾದಿಗಳನ್ನು ಮುಗಿಸಿ ದೇವರ ಉಪಾಸನೆ ಮಾಡಬೇಕು’ ಎಂದರು.<br /> <br /> ‘ಪ್ರಾಣಾಯಾಮ-, ಯೋಗಗಳನ್ನು ಅನುಷ್ಠಾನ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಮನಸ್ಸು ಏಕ್ರಾಗತೆ ಸಾಧಿಸುತ್ತದೆ. ಶರೀರದ ನಾಡಿಗಳು ಸ್ಪಂದಿಸುತ್ತವೆ, ಉತ್ಸಾಹ ಸಹಜವಾಗಿಯೇ ಇರುತ್ತದೆ. ಇದರಿಂದ ದೇಹದಲ್ಲಿ ಆರೋಗ್ಯ ಹೆಚ್ಚುತ್ತದೆ’ ಎಂದರು.<br /> <br /> ಬೆಂಗಳೂರು ಹವ್ಯಕ ಮಹಾಸಭಾದವರು ನಿರ್ವಹಿಸುತ್ತಿರುವ ಸಾಮಾಜಿಕ ಚಟುವಟಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇದಕ್ಕೂ ಹೆಚ್ಚಿನ ಕಾರ್ಯಗಳು ನಡೆಯಲೆಂದು ಆಶಿಸಿದರು. ಬೆಳಗಿನಿಂದ ಆಗಮಿಸಿದ ಶಿಷ್ಯ-ಭಕ್ತರು ಲೋಕಕಲ್ಯಾಣಾರ್ಥವಾಗಿ ಗಾಯತ್ರಿ ಜಪ ಹಾಗು ಕಂಕುಮಾರ್ಚನೆ ನೆರವೇರಿದರು. ಆರ್. ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾತೆಯರು ಶಾಂಕರ ಸ್ತೋತ್ರ ಪಠನ ಹಾಗೂ ಭಗವದ್ಗೀತಾ ಪಠನ ಗೈದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>